ಮೈದಾ.. ಇದು ಯಾರಿಗೆ ತಾನೇ ಗೊತ್ತಿಲ್ಲ. ಗೃಹಿಣಿಯರು ತಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುತ್ತಾರೆ. ಇದು ಬೇರೆ ಎಲ್ಲ ಆಹಾರ ಉತ್ಪನ್ನಗಳೊಂದಿಗೆ ಸುಲಭವಾಗಿ ಬೆರೆತು ಒಳ್ಳೆಯ ರುಚಿ, ಒಳ್ಳೆಯ ವಿನ್ಯಾಸವನ್ನು ನೀಡುವುದರಿಂದ ಇದನ್ನು ಯಥೇಚ್ಛವಾಗಿ ಬಳಸಲಾಗುತ್ತದೆ. ವಿಶೇಷವಾಗಿ ಸಿಹಿತಿಂಡಿಗಳು, ಕೇಕ್, ಬ್ರೆಡ್, ಬನ್, ಲಚ್ಚ ಪರೋಟ ಮೊದಲಾದ ಕೆಲವು ತಿನಿಸುಗಳಲ್ಲಿ ಇದನ್ನು ಮುಖ್ಯವಾಗಿ ಬಳಸಲಾಗುತ್ತದೆ. 90%ದಷ್ಟು ಬೇಕರಿ ತಿನಿಸುಗಳು ಮೈದಾದಿಂದಲೇ ತಯಾರಿಸಲ್ಪಡುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಸುಂದರವಾದ ಬಿಳಿ ಹಿಟ್ಟು ಇಲ್ಲದೆ ಬದುಕುವುದು ಸಾಧ್ಯವಿಲ್ಲ ಎಂಬಂತಾಗಿದೆ.
ಗೋಧಿ ಹಿಟ್ಟು ಮತ್ತು ಮೈದಾ ಹಿಟ್ಟು ಇವೆರಡರಲ್ಲಿ ಯಾವುದು ತುಂಬಾ ರುಚಿಯಾದದ್ದು? ಮೈದಾ ಅಲ್ವಾ. ಆದರೆ ವಾಸ್ತವದಲ್ಲಿ ಮೈದಾ ಕೂಡ ಗೋಧಿ ಹಿಟ್ಟೇ. ಮೈದಾ ಹಿಟ್ಟು ನೋಡೋಕೆ ನಯವಾದ ಬೆಳ್ಳಗಿನ ಹಿಟ್ಟು. ಇದನ್ನು ಅಪರೂಪಕ್ಕೊಮ್ಮೆ ತಿಂದರೆ ದೇಹಕ್ಕೆ ಅಷ್ಟೊಂದು ಹಾನಿ ಆಗುವುದಿಲ್ಲ. ಪ್ರತಿನಿತ್ಯ ಬಳಸಿದರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ.
ಮೈದಾವನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಬಳಸಿದರೆ ಏನಾಗಬಹುದು? ಇದನ್ನು ಬಳಸಿದ ಕೂಡಲೇ ಇದು ದೇಹದ ಮೇಲೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಆದರೆ ಇದನ್ನು ದೀರ್ಘಾವಧಿಯ ತನಕ ಬಳಸಿದರೆ ಮಾತ್ರ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಬೀರುವ ಫಲಿತಾಂಶ ಮಾತ್ರ ತುಂಬಾ ನಿಧಾನವಾಗಿ ಗೋಚರಕ್ಕೆ ಬರುತ್ತದೆ.
ಮೈದಾ ಎಂದರೇನು? ಮೈದಾವು ಒಂದು ಸಂಸ್ಕರಿಸಿದ ಗೋಧಿ ಹಿಟ್ಟು ಆಗಿದ್ದು ಇದರಲ್ಲಿ ಇರುವ ನಾರಿನ ಅಂಶವನ್ನು ಸಂಪೂರ್ಣವಾಗಿ ತೆಗೆದಿರುತ್ತಾರೆ. ಬರೀ ಇಷ್ಟೇ ಅಲ್ಲ, ಇದನ್ನು Benzoic Peroxide ಎಂಬ ರಾಸಾಯನಿಕದಿಂದ ಬ್ಲೀಚ್ ಮಾಡುವುದರಿಂದ ಶುಭ್ರ ಬಿಳಿ ಬಣ್ಣ ಹಾಗೂ ನಯವಾದ ವಿನ್ಯಾಸವನ್ನು ಪಡೆಯುತ್ತದೆ. Benzoic Peroxideನ್ನು ಚೀನಾ ಮತ್ತು ಯೂರೋಪ್ಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಅದರಿಂದ ನಮ್ಮ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳೋಣ.
ಮೈದಾದಲ್ಲಿ ನಾರಿನ ಅಂಶ ಸಂಪೂರ್ಣವಾಗಿ ತೆಗೆದಿರುವುದರಿಂದ ದೇಹದಲ್ಲಿ ಅನಗತ್ಯವಾದ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ದೇಹದ ತೂಕ ಹೆಚ್ಚಿ ಬೊಜ್ಜು ಮುಂತಾದ ಸಮಸ್ಯೆಗಳಿಗೆ ಎಡೆ ಮಾಡಿ ಕೊಡುತ್ತದೆ.
ಮೈದಾದಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುವುದರಿಂದ ಇದನ್ನು ಸೇವಿಸಿದ ಕೂಡಲೇ ರಕ್ತದಲ್ಲಿ ಸಕ್ಕರೆ ಅಂಶ ಏರುತ್ತದೆ ಮತ್ತು ಅಷ್ಟೇ ನಿಧಾನವಾಗಿ ಇಳಿಯುತ್ತದೆ. ಇದರಿಂದ ಸೋಮಾರಿತನ ಆವರಿಸಿ ನಿದ್ರೆ ಬರುತ್ತದೆ.
ನಮ್ಮ ಆಹಾರದಲ್ಲಿ ಇರುವ ನಾರಿನಂಶವು ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಮೈದಾದಲ್ಲಿ ನಾರಿನಂಶ ಸಂಪೂರ್ಣವಾಗಿ ತೆಗೆದಿರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ.
ಮೈದಾದ ಅತಿ ಕೆಟ್ಟ ಗುಣ ಏನೆಂದರೆ ಇದನ್ನು ಸೇವಿಸಿದ ಕೂಡಲೇ ರಕ್ತದಲ್ಲಿ ಸಕ್ಕರೆ ಪ್ರಮಾಣ ಥಟ್ಟನೆ ಲಭ್ಯವಾಗಿ ಮತ್ತೆ ಅಷ್ಟೇ ಬೇಗ ಖಾಲಿಯಾಗುವುದು. ಇದರಿಂದ ದೇಹವು ಪುನಃ ಪುನಃ ಸಕ್ಕರೆಯ ಬೇಡಿಕೆ ಇಡುತ್ತದೆ.
ನಾರು ಪದಾರ್ಥಗಳು ಮಲವಿಸರ್ಜನೆಯು ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತವೆ. ಆದರೆ ಮೈದಾದಲ್ಲಿ ನಾರು ಇಲ್ಲದೆ ಇರುವ ಕಾರಣ ಮಲವಿಸರ್ಜನೆಗೆ ತೊಡಕು ಉಂಟಾಗಿ ಮಲಬದ್ಧತೆ ಸಮಸ್ಯೆ ತಲೆದೋರಬಹುದು
ಮೈದಾ ಸೇವಿಸಿದ ಕೂಡಲೇ ಸಕ್ಕರೆ ಅಂಶದಲ್ಲಿ ಏರುಪೇರು ಆಗುತ್ತದೆ ಇದು ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತದ ಸ್ರವಿಸುವಿಕೆಗೆ ಅಡ್ಡಿ ಉಂಟು ಮಾಡುತ್ತದೆ. ಇದರಿಂದ ಸಿಟ್ಟು ಅಸಹನೆ ಜಾಸ್ತಿಯಾಗುತ್ತದೆ.
(ಸಂಗ್ರಹ)
ಮೈದಾವನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಬಳಸಿದರೆ ಏನಾಗಬಹುದು? ಇದನ್ನು ಬಳಸಿದ ಕೂಡಲೇ ಇದು ದೇಹದ ಮೇಲೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಆದರೆ ಇದನ್ನು ದೀರ್ಘಾವಧಿಯ ತನಕ ಬಳಸಿದರೆ ಮಾತ್ರ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಬೀರುವ ಫಲಿತಾಂಶ ಮಾತ್ರ ತುಂಬಾ ನಿಧಾನವಾಗಿ ಗೋಚರಕ್ಕೆ ಬರುತ್ತದೆ.
ಮೈದಾ ಎಂದರೇನು? ಮೈದಾವು ಒಂದು ಸಂಸ್ಕರಿಸಿದ ಗೋಧಿ ಹಿಟ್ಟು ಆಗಿದ್ದು ಇದರಲ್ಲಿ ಇರುವ ನಾರಿನ ಅಂಶವನ್ನು ಸಂಪೂರ್ಣವಾಗಿ ತೆಗೆದಿರುತ್ತಾರೆ. ಬರೀ ಇಷ್ಟೇ ಅಲ್ಲ, ಇದನ್ನು Benzoic Peroxide ಎಂಬ ರಾಸಾಯನಿಕದಿಂದ ಬ್ಲೀಚ್ ಮಾಡುವುದರಿಂದ ಶುಭ್ರ ಬಿಳಿ ಬಣ್ಣ ಹಾಗೂ ನಯವಾದ ವಿನ್ಯಾಸವನ್ನು ಪಡೆಯುತ್ತದೆ. Benzoic Peroxideನ್ನು ಚೀನಾ ಮತ್ತು ಯೂರೋಪ್ಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಅದರಿಂದ ನಮ್ಮ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳೋಣ.
1. ಸಕ್ಕರೆ ಖಾಯಿಲೆ
ಇದರಲ್ಲಿ 100% ಕಾರ್ಬೊಹೈಡ್ರೇಟ್ ಅಂಶವಿದ್ದು ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಇದರಿಂದ ಮಧುಮೇಹ ರೋಗ ಬರುವ ಸಾಧ್ಯತೆ ತುಂಬಾ ಹೆಚ್ಚು.
2.ದೇಹದ ತೂಕದಲ್ಲಿ ಹೆಚ್ಚಳ
3. ಸೋಮಾರಿತನ ಹೆಚ್ಚುತ್ತದೆ
ಮೈದಾದಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುವುದರಿಂದ ಇದನ್ನು ಸೇವಿಸಿದ ಕೂಡಲೇ ರಕ್ತದಲ್ಲಿ ಸಕ್ಕರೆ ಅಂಶ ಏರುತ್ತದೆ ಮತ್ತು ಅಷ್ಟೇ ನಿಧಾನವಾಗಿ ಇಳಿಯುತ್ತದೆ. ಇದರಿಂದ ಸೋಮಾರಿತನ ಆವರಿಸಿ ನಿದ್ರೆ ಬರುತ್ತದೆ.
4. ಕೊಲೆಸ್ಟ್ರಾಲ್ ಹೆಚ್ಚುತ್ತದೆ
ನಮ್ಮ ಆಹಾರದಲ್ಲಿ ಇರುವ ನಾರಿನಂಶವು ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಮೈದಾದಲ್ಲಿ ನಾರಿನಂಶ ಸಂಪೂರ್ಣವಾಗಿ ತೆಗೆದಿರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ.
5. ಹಸಿವು ಜಾಸ್ತಿಯಾಗುತ್ತದೆ
ಮೈದಾದ ಅತಿ ಕೆಟ್ಟ ಗುಣ ಏನೆಂದರೆ ಇದನ್ನು ಸೇವಿಸಿದ ಕೂಡಲೇ ರಕ್ತದಲ್ಲಿ ಸಕ್ಕರೆ ಪ್ರಮಾಣ ಥಟ್ಟನೆ ಲಭ್ಯವಾಗಿ ಮತ್ತೆ ಅಷ್ಟೇ ಬೇಗ ಖಾಲಿಯಾಗುವುದು. ಇದರಿಂದ ದೇಹವು ಪುನಃ ಪುನಃ ಸಕ್ಕರೆಯ ಬೇಡಿಕೆ ಇಡುತ್ತದೆ.
6. ಮಲಬದ್ಧತೆ ಜಾಸ್ತಿಯಾಗುತ್ತದೆ
ನಾರು ಪದಾರ್ಥಗಳು ಮಲವಿಸರ್ಜನೆಯು ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತವೆ. ಆದರೆ ಮೈದಾದಲ್ಲಿ ನಾರು ಇಲ್ಲದೆ ಇರುವ ಕಾರಣ ಮಲವಿಸರ್ಜನೆಗೆ ತೊಡಕು ಉಂಟಾಗಿ ಮಲಬದ್ಧತೆ ಸಮಸ್ಯೆ ತಲೆದೋರಬಹುದು
7. ಸಿಟ್ಟು, ಅಸಹನೆ ಜಾಸ್ತಿಯಾಗುತ್ತದೆ
ಮೈದಾ ಸೇವಿಸಿದ ಕೂಡಲೇ ಸಕ್ಕರೆ ಅಂಶದಲ್ಲಿ ಏರುಪೇರು ಆಗುತ್ತದೆ ಇದು ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತದ ಸ್ರವಿಸುವಿಕೆಗೆ ಅಡ್ಡಿ ಉಂಟು ಮಾಡುತ್ತದೆ. ಇದರಿಂದ ಸಿಟ್ಟು ಅಸಹನೆ ಜಾಸ್ತಿಯಾಗುತ್ತದೆ.
(ಸಂಗ್ರಹ)








No comments:
Post a Comment