ಮೊದಲು ಒಣ ದ್ರಾಕ್ಷಿಯನ್ನ ಚನ್ನಾಗಿ ತೊಳೆದು ರಾತ್ರಿ ಸಮಯದಲ್ಲಿ ಒಂದು ಲೋಟ ನೀರಿನಲ್ಲಿ ಸ್ವಲ್ಪ ಪ್ರಮಾಣದ ಒಣದ್ರಾಕ್ಷಿಯನ್ನ ಹಾಕಿ ನೆನೆಯಲು ಬಿಡಿ, ನಂತರದ ದಿನ ಬೆಳಗ್ಗೆ ಆ ನೀರನ್ನ ಸ್ವಲ್ಪ ಬಿಸಿ ಮಾಡಿ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿಯನ್ನ ನೆನೆಸಿದ ನೀರನ್ನ ಕುಡಿಯಿರಿ. ಇದನ್ನ ಕುಡಿದ 30 ರಿಂದ 40 ನಿಮಿಷಗಳ ಕಾಲ ಏನನ್ನು ಸೇವಿಸ ಬಾರದು, ಹೀಗೆ ಕನಿಷ್ಠ ನಾಲ್ಕು ತಿಂಗಳುಗಳ ಕಾಲವಾದರು ನೀವು ಮಾಡಬೇಕು. ಸುಮಾರು ಎರಡು ತಿಂಗಳುಗಳ ಬಳಿಕ ನಿಮ್ಮ ಯಕೃತ್ತಿನಲ್ಲಾಗುವ ಬದಲಾವಣೆಯನ್ನ ನೀವು ಕಾಣಬಹುದು.
ಒಣದ್ರಾಕ್ಷಿಯನ್ನ ನೆನೆಸಿದ ನೀರನ್ನ ಸೇವಿಸುವುದರಿಂದ ಯಕೃತ್ ಅಥವಾ ಲಿವರ್ ನ ಅರೋಗ್ಯ ಉತ್ತಮಗೊಳ್ಳುತ್ತದೆ. ಯಕೃತ್ ನ ಸ್ವಚ್ಛತೆಗೆ ಹಲವಾರು ವಿಧಾನಗಳಿವೆ ಅದರಲ್ಲಿ ಈ ಒಣದ್ರಾಕ್ಷಿ ನೆನೆಸಿದ ನೀರು ಸಹ ಒಂದಾಗಿದೆ. ಇದು ಹೆಚ್ಚು ಪ್ರಭಾವವನ್ನ ಬೀರುತ್ತದೆ. ಈ ನೀರಿಗೆ ಒದಗಿರಿವ ಔಷಧಿಯ ಪರಿಣಾಮಕ್ಕೆ ಒಣ ದ್ರಾಕ್ಷಿಯಲ್ಲಿರುವ ಪೋಷಕಾಂಶಗಳು ಕಾರಣ. ಈ ನೀರನ್ನ ಸೇವಿಸಿದ ನಾಲ್ಕೇ ದಿನದಲ್ಲಿ ನಿಮ್ಮ ಜೀರ್ಣಕ್ರಿಯೆ ಉತ್ತಮಗೊಂಡಿರುವುದನ್ನ ನೀವು ಗಮನಿಸ ಬಹುದಾಗಿದೆ.
ಇದಲ್ಲದೆ ನಮ್ಮ ದಿನದ ಚಟುವಟಿಕೆಗಳು ಹೆಚ್ಚು ಉಲ್ಲಾಸದಾಯಕವಾಗಿರುತ್ತವೆ. ಈ ಮೇಲಿನ ಸಮಸ್ಯೆಗಳಿಗೆ ಈ ನೀರನ್ನು ಮನೆಯಲ್ಲೇ ತಯಾರಿಸಿ ಇದರ ಪರಿಹಾರವನ್ನು ಕಂಡುಕೊಳ್ಳಬಹುದು. ಇನ್ನು ಒಣದ್ರಾಕ್ಷಿಯಲ್ಲಿ ಫೈಬರ್ ಅಂಶ ಇರುವುದರಿಂದ ಮಲಬದ್ಧತೆ ಇರೋರಿಗೆ ಕೂಡ ಇದು ಸಹಕಾರಿ.
No comments:
Post a Comment